ವಿಭಿನ್ನ ರೀತಿಯ ಪ್ರಚಾರ ಹಾಗೂ ಕತೆಯಲ್ಲಿ ಏನೋ ಒಂದು ರೀತಿಯ ಕುತೂಹಲ ಕ್ರಿಯೇಟ್ ಮಾಡಿದಂಥ ಚಿತ್ರ ರೆಡ್ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಏರೋಟಿಕ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿಯಂತಹ ವಿಶೇಷ ಕಥಾಹಂದರ ಹೊಂದಿದ ಈ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಷಡ್ಯಂತ್ರ, ಮನಿಹನಿಶನಿ ಚಿತ್ರಗಳ ನಿರ್ದೇಶಕ ರಾಜೇಶ್ ಮೂರ್ತಿಯವರೇ ನಿರ್ದೇಶಿಸಿರುವ ರೆಡ್ ಇಂದೊಂದು ಪ್ರೀತಿಯ ಸಂಕೇತ ಹಾಗೂ ರಕ್ತದ ಹೆಗ್ಗುರುತೂ ಹೌದು, ಈ ಚಿತ್ರದಲ್ಲಿ ಎರಡು ಅಂಶಗಳು ಪ್ರಧಾನವಾಗಿರುವುದರಿಂದ ಕತೆಗೆ ಸೂಕ್ತವಾಗಿದೆಯೆಂದು ಆ ಹೆಸರಿಟ್ಟಿದ್ದೇವೆ ಎಂದು ನಿರ್ದೇಶಕರು ಸ್ಪಷ್ಟನೆ ನೀಡುತ್ತಾರೆ. ಬೇರೆ ಭಾಷೆಗಳಲ್ಲಿ ಬರುತ್ತಿರುವ ಏರೋಟಿಕ್ ಥ್ರಿಲ್ಲರ್ ಚಿತ್ರಗಳಂತೆ ಕನ್ನಡದಲ್ಲೂ ಅಂತಹ ಚಿತ್ರಗಳ ಕೊರತೆಯನ್ನು ನೀಗಿಸಲೆಂದೇ ನಾವೀಗ ಚಿತ್ರವನ್ನು ತಯಾರಿಸಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಗಂಡ ಹೆಂಡತಿ ಸಂಬಂಧಗಳಲ್ಲಿ ಒಂದು ತಪ್ಪು ಮಾಡಿದರೆ ಅದರಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಒಂದು ಉತ್ತಮ ಸಂದೇಶದೊಂದಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ.
ಜೀವನದಲ್ಲಿ ಗಂಡು ಹೆಣ್ಣು ಇಬ್ಬರೂ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಒಬ್ಬರು ಹಾದಿ ತಪ್ಪಿದರೆ ಅದು ಎಷ್ಟೆಲ್ಲಾ ದುಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ ಎನ್ನುವಂತಹ ಕಥಾಹಂದರ ಈ ಚಿತ್ರದಲ್ಲಿದೆ. ವಯಸ್ಕ ಯುವಕ ಯುವತಿ ಇಬ್ಬರಿಗೂ ಚಿತ್ರದಲ್ಲಿ ಒಳ್ಳೆಯ ಸಂದೇಶವಿದ್ದು ಈ ವಾರ ರಾಜ್ಯಾದ್ಯಂತ ಸುಮಾರು ೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ರಂಗಭೂಮಿ ಹಿನ್ನೆಲೆಯ ರಾಜ್ಆರ್ಯನ್, ಕಾಮಿನಿ, ರಾಹುಲ್, ಸೋಮಣ್ಣ, ಎಂ.ಜೆ.ಪೃಥ್ವಿ ಹಾಗೂ ಪಂಚಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ನಿರ್ದೇಶಕ ರಾಜೇಶ್ ಮೂರ್ತಿಯವರೇ ನಿರ್ಮಾಣ ಹಾಗೂ ಸಂಕಲನ, ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ, ನಾಗೇಶ್ ಸಾಹಿತ್ಯ, ಕಾರ್ತಿಕ್ ಸಂಭಾಷಣೆಗಳನ್ನು ರಚಿಸಿದ್ದಾರೆ.